ನ್ಯೂಸ್ ನಾಟೌಟ್: ಧರ್ಮ ಕ್ಷೇತ್ರಗಳ ಉಳಿವಿಗಾಗಿ ಸನಾತನ ಹಿಂದೂ ಧರ್ಮದ ಉನ್ನತಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೇವರ ದರ್ಶನ ಪಡೆದ ಅವರು ಬಳಿಕ ಪ್ರಸಾದ ಸ್ವೀಕರಿಸಿದರು. ಕೊಡುಗೈ ದಾನಿಯಾಗಿರುವ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ತಮ್ಮ ಕೈನಿಂದ ಆದ ಸಹಾಯವನ್ನು ಮಾಡಿದ್ದಾರೆ. ಬೆಳ್ತಂಗಡಿ ಭಾಗದ ಹಲವಾರು ಜನರ ಪಾಲಿಗೆ ನೆಚ್ಚಿನ ಕಿರಣ್ ಅಣ್ಣ ಎಂದು ಖ್ಯಾತಿ ಪಡೆದಿದ್ದಾರೆ.













