27.7 C
Sullia
Sunday, March 8, 2026

ಚಿನ್ನದ ದರ ಇಳಿಯಲೆಂದು ಹರಕೆ ಹೊತ್ತ ಭಕ್ತ!! ಅಪರೂಪದ ಬೇಡಿಕೆಗೆ ಒಲಿಯುತ್ತಾಳಾ ದೇವಿ?

ನ್ಯೂಸ್ ನಾಟೌಟ್ : ಜಾತ್ರೆಗಳಲ್ಲಿ ಹತ್ತು ಹಲವು ಸಂಕಷ್ಟಗಳ ನಿವಾರಣೆಗೆ ಭಕ್ತರು ಹರಕೆ ಹೊರುವುದು ಸರ್ವೆ ಸಾಮಾನ್ಯ. ಆದರೆ, ದಿನೇದಿನೇ ಏರುತ್ತಿರುವ ಚಿನ್ನದ ಬೆಲೆ ಬಡವರ ಕೈಗೆ ಎಟುಕುವಂತಾಗಲಿ ಎಂಬ ಆಶಯದೊಂದಿಗೆ ಭಕ್ತನೊಬ್ಬ ಜೋಡು ಬಾಳೆ ಹಣ್ಣುಗಳ ಮೇಲೆ ‘ಚಿನ್ನದ ದರ ಇಳಿಯಲಿ: ಮುನಿದ ಚಿನ್ನ ಒಲಿಯಲಿ’ ಎಂದು ಬರೆದು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ದುರ್ಗಮ್ಮದೇವಿ ರಥೋತ್ಸವದಲ್ಲಿ ಕೆ.ನಾಗರಾಜ್ ಎನ್ನುವ ಭಕ್ತ ಈ ರೀತಿ ಹರಕೆ ಹೊತ್ತಿದ್ದಾರೆ.

ಚಿನ್ನ ಕೊಳ್ಳುವುದೇ ದುಸ್ತರ

ಮದುವೆ ಕಾಲದ ಈ ಸಂದರ್ಭದಲ್ಲಿ ಚಿನ್ನ ಕೊಳ್ಳುವುದೇ ದುಸ್ತರವಾಗಿರುವಾಗ ಬೆಲೆ ಇಳಿಯಲಿ ಎಂಬ ಆಶಯದೊಂದಿಗೆ ಹರಕೆ ಹೊತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಡುವೆ, ಈ ವಿಭಿನ್ನ ಹರಕೆ ಎಲ್ಲರ ಗಮನ ಸೆಳೆದಿದ್ದು, ದೇವಿಯ ಕೃಪೆಯಿಂದ ಚಿನ್ನದ ದರ ಇಳಿಯಲಿ ಎಂಬ ಆಶಯವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಲಿ ಎಂಬುದು ದೇಶದ ಸರ್ವಸಾಮಾನ್ಯರ ದೊಡ್ಡ ಬೇಡಿಕೆಯಾಗಿರುವ ಸಂದರ್ಭದಲ್ಲಿ, ಈ ರೀತಿಯ ವಿಭಿನ್ನ ಭಕ್ತಿ ಸಮರ್ಪಣೆ ವಿಶೇಷ ಚರ್ಚೆಗೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles