ನ್ಯೂಸ್ ನಾಟೌಟ್: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್ ) ನಿವೃತ್ತ ಕೋಚ್ ಆಗಿರುವ ಡಾ. ಲಕ್ಷ್ಮೀಶ ಅವರ ಧರ್ಮ ಪತ್ನಿ ಲಕ್ಷ್ಮೀಯವರು ದಕ್ಷಿಣದ ಪ್ರಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಜ.26ರಂದು ವೀಣಾ ವಾದನ ಸೇವೆಯನ್ನು ನೀಡಿದರು. ಸುಮಾರು 1 ಗಂಟೆಗಳ ದೇವರ ನಾಮ ಸ್ಮರಣೆಯ ಹಾಡುಗಳು ವೀಣೆಯಿಂದ ಹೊರಹೊಮ್ಮಿದವು. ಈ ಸೇವಾ ಕಾರ್ಯಕ್ರಮಕ್ಕೆ ಅವಕಾಶವನ್ನು ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ಖ್ಯಾತ ವಕೀಲರಾದ ವೆಂಕಪ್ಪ ಗೌಡರಿಗೆ ಡಾ.ಲಕ್ಷ್ಮೀಶ ದಂಪತಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.













