ನ್ಯೂಸ್ ನಾಟೌಟ್: ದಲಿತ ಸಮಾಜಕ್ಕೆ ಅವಮಾನ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಂದೇಶ ಅನ್ನುವವರು ಹಾಕಿದ ಸಂದೇಶವನ್ನು ಕಟು ಪದಗಳಿಂದ ಟೀಕಿಸುತ್ತಿರುವುದಾಗಿ ಕೆರಳಿದ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ತಿಳಿಸಿದ್ದಾರೆ. ದಲಿತರು ಕೂಡ ನಿಮ್ಮಂತೆ ಮನುಷ್ಯರು, ಆ ಸಮಾಜದ ಹೆಣ್ಣು ಮಗಳು ಶಾಸಕಿ ಆಗಿರುವುದು ಎಲ್ಲ ಮಹಿಳೆಯರಿಗೆ ಸಂದ ಗೌರವ, ಹೀಗಿರುವಾಗ ನಿಮ್ಮ ರಾಜಕೀಯ ತೆವಲಿಗೆ ದಲಿತ ಸಮಾಜದ ಹೆಣ್ಣು ಮಗಳನ್ನು ಕೀಳು ಭಾವನೆಯಲ್ಲಿ ಬಿಂಬಿಸಿ ರಾಷ್ಟ್ರೀಯ ಪಕ್ಷಕ್ಕೆ ಅವಮಾನ ಮಾಡಬೇಡಿ, ಈ ಕೂಡಲೇ ಕ್ಷಮೆ ಕೇಳದಿದ್ದರೆ ದಲಿತ, ಮಹಿಳಾ ಸಂಘಟನೆಯನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಜೀವಂತ ಇರುವ ವ್ಯಕ್ತಿಗೆ ಶ್ರದ್ಧಾಂಜಲಿ ಹಾಕುವ ಕೀಳು ಮಟ್ಟದ ಯೋಚನೆಗೆ ನಮ್ಮ ದಿಕ್ಕಾರ’ ಎಂದು ಸೂರ್ಯವಂಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













