ನ್ಯೂಸ್ ನಾಟೌಟ್: ಸುಳ್ಯದ ಮಟ್ಟಿಗೆ ಕೆವಿಜಿ ಹಬ್ಬವೆಂದರೆ ಇಡೀ ಊರಿಗೆ ಊರು ಸಂಭ್ರಮ ಪಡುವ ಹಬ್ಬ. ಪ್ರತೀ ವರ್ಷವೂ ಅದ್ದೂರಿಯಾಗಿ ಕಾರ್ಯಕ್ರಮವನ್ನು ಸುಳ್ಯದ ಚೆನ್ನಕೇಶವ ದೇವರ ಮುಂಭಾಗದ ವಠಾರದಲ್ಲಿ ಆಯೋಜಿಸಲಾಗುತ್ತದೆ. ಈ ಸಲವೂ ಭರ್ಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾಟಕ ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಅತಿಥಿ ಗಣ್ಯರಿಗಾಗಿ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಂತೆಯೇ ಕೆವಿಜಿ ಹಬ್ಬದ ಹಾಲಿ ಅಧ್ಯಕ್ಷರಾಗಿರುವ ಕೆ.ಟಿ. ವಿಶ್ವನಾಥ್ ಅವರಿಗೂ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಆ ಆಸನವನ್ನು ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಬಿಟ್ಟು ಕೊಟ್ಟರು. ತಾವು ಮಾಮೂಲಿ ಜನರಂತೆ ನೆಲದ ಮೇಲೆ ಕುಳಿತು ನಾಟಕ ವೀಕ್ಷಿಸಿದರು. ಈ ಫೋಟೋಗಳು ಈಗ ವೈರಲ್ ಆಗುತ್ತಿದ್ದು ಅವರ ಕಾಳಜಿಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.













