ನ್ಯೂಸ್ ನಾಟೌಟ್: ಮಡಿಕೇರಿ ದಸರಾದ ಸಮಯದಲ್ಲಿ ದಶ ಮಂಟಪಗಳ ಬಹುಮಾನ ವಿತರಣೆ ವೇಳೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಸೂರಜ್ ಹಾಗೂ ಪೊಲೀಸ್ ಪೇದೆ ಉದಯ್ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಕ್ಷಿತ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ವೀರಭದ್ರಯ್ಯ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದ್ದಾರೆ.













